ಚೈತನ್ಯ ಧಾಮ

ಹರಿಯೆ ನಿನ್ನ ನಂಬಿ ನಾನು ಬಾಳಿಹೆನು
ನನ್ನ ನೀನು ಕೈ ಹಿಡಿದು ನಡೆಸು ಬಾ
ನಿನ್ನ ತೊರೆದು ನಿನ್ನ ಮಾಯೆ ಬೇಡೆನಗೆ
ನಾನು ನಡೆದಲಿ ನೀನು ಜೊತೆಯಾಗಿ ಬಾ

ನೀನು ಕರುಣಾಸಿಂಧು ದಯಾಸಾಗರ
ನಿನ್ನೊಳಗೆ ಎಲ್ಲಿಹದು ಭೇದ ತಾರತಮ್ಯ
ಪಾಪಿಯಾಗಲಿ ದುರಾಚಾರಯಾಗಿರಲಿ
ಸಜ್ಜನರೆಲ್ಲರಿಗೂ ನಿನ್ನ ಕೃಪೆ ಅದಮ್ಯ

ನೀನು ರಚಿಸಿದೆ ಈ ಭವಸಾಗರ ಆಗರ
ನಿತ್ಯ ನಾನು ಇದರಲ್ಲಿ ಮುಳುಗಿ ತೇಲಿಹನು
ನಿನ್ನ ಪ್ರೀತಿಯೆಂಬ ನಾವೆ ನೀಡಿ ಎನ್ನ
ಬದುಕಿಸಬೇಕು ನೊಂದು ಬೆಂದಿಹನು

ಎನ್ನೆದೆಯಲಿ ಪುಟಿಯಲಿ ನಿನ್ನಪಡೆ ದಾಹ
ಅರೆಗಳಿಗೆ ನಿನ್ನ ಮರೆತು ನಾ ಬಾಳದಿರಲಿ
ನಿನ್ನ ರೂಪ ಎನ್ನ ಕಂಗಳಲ್ಲಿ ತುಂಬಿರಲಿ
ಮಾಣಿಕ್ಯ ವಿಠಲನಿಗೆ ಚೈತನ್ಯ ಧಾಮವಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನವಾಗಿಯೇ ಏಕೆ?
Next post ಧಾರವಾಡದ ಅಶ್ವರತ್ನ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys